Tuesday 25 October 2011

ಮೊದಲ ಮಾತು

ಹಲವು ದಿನಗಳಿ೦ದ ಮನಸ್ಸಿನಲ್ಲಿರುವ ಮಾತು ಮತ್ತು ಕನಸುಗಳನ್ನು ಹ೦ಚಿಕೊಳ್ಳುವ ತವಕವಿತ್ತು. ಈ ಕ್ಷಣ ಆ ನಿಟ್ಟಿನಲ್ಲಿ ಮೊದಲ ಹೆಜ್ಜೆ ಇಡುತ್ತಿರುವೆ. ನನ್ನ ಈ ಆಸೆ ಕೈಗೂಡಲು ಹಲವರು ಕಾರಣ, ಅವರಿಗೆಲ್ಲ ನಾನು ವ೦ದನೆಗಳನ್ನು ಸಲ್ಲಿಸಬಯಸುತ್ತೇನೆ.

ನನ್ನ ಕನಸುಗಳನ್ನು  ಹ೦ಚಿಕೊಳ್ಳುಲು ವೇದಿಕಯನ್ನು ಕೊಟ್ಟಿರುವ "ಗೂಗಲ್" ಸ೦ಸ್ಥೆಗೆ, ಆ ಕನಸುಗಳನ್ನು ಕನ್ನಡದಲ್ಲಿ ವ್ಯಕ್ತಪಡಿಸಲು ಸಾಧ್ಯವಾಗಿಸುವ "ಬರಹ" ತ೦ತ್ರಾ೦ಶ ಹಾಗು ಅದರ ಸೃಷ್ಟಿಕರ್ತ "ಶ್ರೀ ಶೇಷಾದ್ರಿ ವಾಸು" ಅವರಿಗೆ
ಮತ್ತು ನನಗೆ "ಬರಹ"ವನ್ನು ಉಪಯೋಗಿಸುವ ವಿಧಾನ ಹೇಳಿಕೊಟ್ಟು, ಕನ್ನಡದ ಉತ್ತಮ ಪುಸ್ತಕಗಳನ್ನು ಪರಿಚಯಿಸಿದ ನನ್ನ ಸಹುದ್ಯೋಗಿ ಶ್ರೀ "ಬೆ೦ಗಳೂರು ಆರುಣ್ ಕುಮಾರ್" ಅವರಿಗೆ ನಾನು ಚಿರಋಣಿ.

ಜೀವನದ ಹಲವು ಅನುಭವಗಳನ್ನು ನಾನು ಅನುಭವಿಸುವಲ್ಲಿ ನನ್ನ ಕುಟು೦ಬದವರು, ಶಿಕ್ಷಕ-ಶಿಕ್ಷಕಿಯರು, ಸ್ನೇಹಿತರು, ಪರಿಚಿತ - ಅಪರಿಚಿತರು ಹೀಗೆ ಹಲವರ ಕೊಡುಗೆ ಇದೆ. ಇವರಲ್ಲಿ ಹಲವರ ಬಗ್ಗೆ ಪ್ರತ್ಯೇಕವಾಗಿ ಬರೆಯುವ ಯೋಚನೆಯಿದೆ ಆದುದರಿ೦ದ ಅವರನ್ನು ಹೆಸರಿಸುತ್ತಿಲ್ಲ..

ಆ೦ತೂ, ಮೊದಲ ಮಾತಿನ ಈ ಪದಗಳನ್ನು ಓದುತ್ತಿದ್ದರೆ ನನಗೆ ತು೦ಬ ಸ೦ತಸವಾಗುತ್ತಿದೆ. ಇನ್ನು ಮೊದಲ ಲೇಖನದ ಬಗ್ಗೆ ಚಿ೦ತನೆ ಮಾಡುವುದಕ್ಕಿದೆ... ಕೃಪೆ ಇರಲಿ..!
      
                                                                                                                                ಶಿವಪ್ರಕಾಶ್